ನಾಯಿ ಸಾಕೋರಿಗೆ ಕಾಂಗ್ರೆಸ್ ಉಚಿತ ಕರೆಂಟ್ ನೀಡುತ್ತಿದೆ : ಇಬ್ರಾಹಿಂ

ಬುಧವಾರ, 18 ಜನವರಿ 2023 (08:11 IST)
ಬೆಂಗಳೂರು : ಬಡ ಜನರಿಗೆ ಕರೆಂಟ್ ಕೊಡದ ಕಾಂಗ್ರೆಸ್ ಅವ್ರು ಎಸಿಯಲ್ಲಿ ನಾಯಿ ಸಾಕೋರಿಗೆ ಕರೆಂಟ್ ಕೊಡ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದರು.

ಕಾಂಗ್ರೆಸ್ನ 200 ಯುನಿಟ್ ವಿದ್ಯುತ್ ಘೋಷಣೆ ಮತ್ತು 2 ಸಾವಿರ ಗೃಹಿಣಿಯರಿಗೆ ಹಣ ಘೋಷಣೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿಯ ಆಶ್ವಾಸನೆ ನೀಡುತ್ತಿದ್ದಾರೆ.

ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್ಗಢದಲ್ಲಿ ಅವರ ಸರ್ಕಾರವೇ ಇದೆ. ಅಲ್ಲಿ ಮಾಡಿ ತೋರಿಸಬೇಕಿತ್ತು. ಅವರು ಅಲ್ಲಿ ಮಾಡದೇ ಇಲ್ಲಿ ಹೇಗೆ ಮಾಡುತ್ತಾರೆ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

ರೈತರಿಗೆ ವಿದ್ಯುತ್ ಕೊಡುವುದಕ್ಕೆ ಆಗುವುದಿಲ್ಲ ನಿಮಗೆ. ನಗರದಲ್ಲಿ ಎಸಿ ರೂಂನಲ್ಲಿ ನಾಯಿ ಸಾಕಲು ಕರೆಂಟ್ ಕೊಡುತ್ತೀರಾ. ಬರೀ ನಗರ ಪ್ರದೇಶದ ಜನರಿಗೆ ಕೊಟ್ಟರೆ ಹಳ್ಳಿ ಜನರಿಗೆ ಏನ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ