ವೀರಪ್ಪ ಮೊಯಿಲಿ ಟ್ವಿಟರ್ ಎಡವಟ್ಟಿಗೆ ಪುತ್ರ ಹರ್ಷ ಮೊಯಿಲಿಗೆ ನೋಟಿಸ್

ಭಾನುವಾರ, 18 ಮಾರ್ಚ್ 2018 (09:38 IST)
ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಹಂಚಿಕೆಯನ್ನು ಗುತ್ತಿಗೆದಾರರು ತೀರ್ಮಾನಿಸುತ್ತಿದ್ದಾರೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಟ್ವೀಟ್ ಪ್ರಮಾದಕ್ಕೆ ಇದೀಗ ಪುತ್ರ ಹರ್ಷ ಮೊಯಿಲಿ ಬೆಲೆ ತೆತ್ತಿದ್ದಾರೆ.
 

ಹರ್ಷ ಮೊಯಿಲಿಗೆ ಕೆಪಿಸಿಸಿ ನೋಟೀಸ್ ಜಾರಿ ಮಾಡಿದೆ. ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹರ್ಷ ಮೊಯಿಲಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಮೊಯಿಲಿ ಖಾತೆಯಿಂದ ಹರ್ಷ ಮೊಯಿಲಿ ಟ್ವೀಟ್ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಾರ್ಕಳ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಹರ್ಷ ಮೊಯಿಲಿ ನೋಟಿಸ್ ನೀಡಲಾಗಿದ್ದು, ಅವರೀಗ ಒಂದು ವಾರದೊಳಗೆ ಇದಕ್ಕೆ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ