ನಮ್ಮ ಮೇಲೆ ಐಟಿ ದಾಳಿ ಮಾಡಿ ಅಂತಿದ್ದಾರೆ ಕೈ ನಾಯಕರು!

ಗುರುವಾರ, 22 ಮಾರ್ಚ್ 2018 (09:31 IST)
ಬೆಂಗಳೂರು: ಐಟಿ ದಾಳಿ ಎಂದರೆ ಎಂತಹಾ ನಾಯಕರಾದರೂ ಅರೆಕ್ಷಣ ಬೆವರುತ್ತಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ದಾಳಿ ಮಾಡುವುದಿದ್ದರೆ ನಮ್ಮೆಲ್ಲರ ಮೇಲೆ ದಾಳಿ ಮಾಡಿ ಎಂದು ಇಂದು ರ್ಯಾಲಿ ನಡೆಸಲಿದ್ದಾರೆ.
 

ಕೆಪಿಸಿಸಿ ಕಚೇರಿಯಿಂದ ಐಟಿ ಇಲಾಖೆ ಕಚೇರಿಯವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ. ಪದೇ ಪದೇ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ದಾಳಿ ಮಾಡುವುದಿದ್ದರೆ ನಮ್ಮೆಲ್ಲರ ಮೇಲೆ ದಾಳಿ ಮಾಡಿ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಲಿದ್ದಾರೆ.

ಚುನಾವಣೆ ಹಿನ್ನಲೆಯಲ್ಲಿ ಈ ರೀತಿ ಬೇಕೆಂದೇ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಕೈನಾಯಕರ ಆರೋಪ. ಅದರ ಜತೆಗೆ ಇಂದು ಸಂಜೆ ಐಟಿ ಇಲಾಖೆ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಲಿದ್ದು, ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ