ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವು; ಮೂವರಿಗೆ ಅಭಿನಂದನೆ ತಿಳಿಸಿದ ಡಿಕೆಶಿ

ಮಂಗಳವಾರ, 6 ನವೆಂಬರ್ 2018 (13:00 IST)
ಬೆಂಗಳೂರು : ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಗೆಲುವು ಸಾಧಿಸುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು ಮೊದಲು ಶ್ರೀರಾಮುಲುಗೆ ಅಭಿನಂದನೆ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ‘ಮೂವರಿಗೆ ಮೊದಲು ನಾನು ಅಭಿನಂದನೆ ಹೇಳ ಬಯಸುತ್ತೇನೆ. ಅದರಲ್ಲಿ ಮೊದಲಿಗೆ ಶ್ರೀರಾಮುಲು ಅಣ್ಣಂಗೆ ಅಭಿನಂದನೆ ಹೇಳುತ್ತೇನೆ. ಯಾಕೆಂದರೆ ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಬಹಳ ಶಾಂತ ರೀತಿಯಿಂದ ಚುನಾವಣೆ ಎದುರಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.


ನಂತರ ‘ಎರಡನೇಯದಾಗಿ  ಶಾಂತಕ್ಕ ಕೂಡ ಒಳ್ಳೆಯವರು ಅವರೂ ಶಾಂತಯುತವಾಗಿಯೇ ಚುನಾವಣೆ ಎದುರಿಸಿದ್ದಾರೆ ನಂತರ ಬಳ್ಳಾರಿ ಜನರಿಗೆ ಧನ್ಯವಾದ ಹೇಳುತ್ತೇನೆ. ಪಕ್ಷ, ಜಾತಿ ಧರ್ಮ ಬಿಟ್ಟು ನಮ್ಮನ್ನು ಬೆಂಬಲಿಸಿದ್ದೀರ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ