ದೇವಸ್ಥಾನದ ಎದುರು ಸಿ ಟಿ ರವಿ ವಿರುದ್ಧ ಬೋರ್ಡ್ ನೇತು ಹಾಕಿದ ಕಾಂಗ್ರೆಸ್ ಕಾರ್ಯಕರ್ತರು

ಸೋಮವಾರ, 27 ಫೆಬ್ರವರಿ 2023 (15:21 IST)
ಬಿಜೆಪಿ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿರುವ ಹಿನ್ನೆಲೆ ಸಿ.ಟಿ.ರವಿಯನ್ನು ದೇವಸ್ಥಾನದ ಪ್ರವೇಶವಕ್ಕೆ ನಿರ್ಬಂಧಿಸಬೇಕು ಎಂದು ನಾಮಫಲಕವನ್ನ ಕಾಂಗ್ರೆಸ್ ಅಳವಡಿಸಿದೆ.ಅಲ್ಲದೇ ಸರ್ಕಾರದ ಮುಖ್ಯಕಾರ್ಯದರ್ಶಿ ಸರ್ಕಾರಿ ಬಂಗಲ್ಲೆ ಪಕ್ಕದಲ್ಲಿರುವ ಮಾರುತಿ ದೇವಸ್ಥಾನದ ಎದುರು ಸಿಟಿ ರವಿ ಪೋಸ್ಟರ್ ಅಂಟಿಸಲಾಗಿದೆ.ಸಿಟಿ ರವಿ ಮಾಂಸ ತಿನ್ನುವ ಪೋಸ್ಟರ್ ದೇವಸ್ಥಾನದ ಮುಂದೆ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಅಂಟಿಸಿದ್ದಾರೆ.ದೇವಸ್ಥಾನದ ಎದುರು ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೋರ್ಡ್ ನೆತ್ತು ಹಾಕಿದ್ದು,ಸಿ ಟಿ ರವಿಯವರಿಗೆ ದೇವಸ್ಥಾನ‌ ಪ್ರವೇಶ ನಿರ್ಬಂಧಿಸಬೇಕು.ರವಿ ನಲ್ಲಿ ಮೂಳೆ ಹೊಟೇಲ್' ಎಂದು ವ್ಯಂಗ್ಯವಾಗಿ ಬೋರ್ಡ್ ಬರೆದು ನೆತ್ತಹಾಕಲಾಗಿದೆ.
 
ಇನ್ನು ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಸಿಟಿ ರವಿ ಮಾಂಸ್ ತಿಂದು ದೇವಸ್ಥಾನಕ್ಕೆ ಪ್ರವೇಶಮಾಡಿದ್ದಾರೆ.ರಾಜ್ಯದಲ್ಲಿರುವ ಎಲ್ಲಾ ಹಿಂದು ದೇವಸ್ಥಾನಗಳಲ್ಲಿ ಸಿಟಿ ರವಿಯನ್ನು ನಿರ್ಬಂಧಿಸಬೇಕು.ನಾವು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡ್ತಿದ್ದೇವೆ .ಸಿಟಿ ರವಿಯನ್ನು ಯಾವುದೇ ದೇವಾಲಯಕ್ಕೆ ಪ್ರವೇಶ ನೀಡಬಾರದು.ಸಿಟಿ ರವಿ ಮಾಂಸ್ ತಿಂದು ದೇವಾಲಯಕ್ಕೆ ಪ್ರವೇಶಮಾಡಿ.ಹಿಂದು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಕೂಡಲೇ ಸಿಟಿ ರವಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಜರಾಯಿ ಇಲಾಖೆಗೆ ಮನವಿ ಮಾಡ್ತಿದೇವೆ ಎಂದು ಮನೋಹರ್ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ