‘ಮತಗಳ ಆಸೆಗಾಗಿ ವಿವಾದ ಸೃಷ್ಟಿ’

ಗುರುವಾರ, 7 ಏಪ್ರಿಲ್ 2022 (17:58 IST)
ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಎಲ್ಲವೂ ಅತಿರೇಕವಾಗಿದ್ದು, ಮತಗಳ ಆಸೆಗಾಗಿ ಒಂದಾದ ಮೇಲೊಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. M.B ಪಾಟೀಲ್​ ಹೇಳಿಕೆ ನೀಡಿದ್ದಾರೆ. ಯುವಕನ ಹತ್ಯೆ ವಿಚಾರವಾಗಿ ಮಾತಾಡಿದ ಅವರು, ಹಿಜಾಬ್, ಕಾಶ್ಮೀರಿ ಫೈಲ್ಸ್, ದೇವಸ್ಥಾನ ಜಾತ್ರೆ ನಿರ್ಬಂಧ, ಹಲಾಲ್, ಅಜಾನ್ ವಿಚಾರವಾಗಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಇದು‌ ಮುಂದೆ ಅವರಿಗೇ ತಿರುಗುಬಾಣವಾಗಲಿದೆ. ಈ ಕಾರಣದಿಂದ ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ಇಲ್ಲಿಗೆ ಬರಲು ಹಿಂಜರಿಯುತ್ತಾರೆ. ಇದರಿಂದ ರಾಜ್ಯವೂ ಸಹ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ