'ಹಿಂದೂಗಳಂತೆ ಮುಸ್ಲಿಮರೂ ಪೌರಕಾರ್ಮಿಕರಾಗಿ'

ಗುರುವಾರ, 7 ಏಪ್ರಿಲ್ 2022 (17:55 IST)
ಹಿಂದೂ ಪೌರಕಾರ್ಮಿಕರು ಮುಸಲ್ಮಾನರ ಅಂಗಡಿ, ಮನೆ ಮುಂದೆ ಕಸ ಗುಡಿಸುತ್ತಾರೆ. ಅವರ ಶೌಚಾಲಯವನ್ನು ಕ್ಲೀನ್ ಮಾಡುತ್ತಾರೆ. ಆದರೆ ಮುಸಲ್ಮಾನರು ಯಾಕೆ ಪೌರಕಾರ್ಮಿಕರ ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು. ಸಮಾನತೆ ಅಂದ ಮೇಲೆ ಎಲ್ಲವೂ ಒಂದೇ ಆಗಬೇಕು. ಹಾಗಾದರೆ ಮುಸಲ್ಮಾನರೂ ಕೂಡ ಪೌರ ಕಾರ್ಮಿಕರಾಗಿ ಸೇರಿ ಹಿಂದೂಗಳ ಮನೆ ಮುಂದೆ ಕಸ ಗುಡಿಸಿ ಔದಾರ್ಯ ತೊರಲಿ ಎಂದು ಸವಾಲು ಹಾಕಿದರು. ಮಹಾರಾಷ್ಟ್ರದ ಆದಿತ್ಯ ಠಾಕ್ರೆ ಹೇಳಿರುವುದು ನೂರಕ್ಕೆ ನೂರು ಸತ್ಯವಾಗಿದೆ. ದೇಶದಲ್ಲಿ ಮೈಕ್‍ಗಳ ಹಾವಳಿ ವಿಪರೀತವಾಗಿದೆ. ನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್‍ಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಈ ಮೈಕ್‍ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ