ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹಿಂದೆ ಹೇಳಿಕೆ ನೀಡಿದಂತೆ ಬೂರ್ಕಾ ಧಿರಿಸನ್ನು ಯಾರೂ ಬೇಕಾದರೂ ಧರಿಸಬಹುದು. ಅದನ್ನು ಮುಸ್ಲಿಂರು ಮಾತ್ರ ಧರಿಸುತ್ತಾರೆ ಎಂದು ಒಂದೇ ಸಮುದಾಯಕ್ಕೆ ಅದನ್ನು ಯಾಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದ್ದರು.
ಕಾಲೇಜ್ ಗೆ ಬೂರ್ಕಾ ಜೊತೆ ಕೇಸರಿ ಶಾಲು ಬೇಕಾದರೂ ಹಾಕಿಕೊಂಡು ಬರಬಹುದು. ಉಡುಪು ಅವರವರ ಆಯ್ಕೆ. ಆದರೆ, ಕಾಲೇಜು ವೇಳೆಯಲ್ಲಿ ಡೀಸೆಂಟ್ ಬಟ್ಟೆಯನ್ನಷ್ಟೇ ತೊಡಬೇಕು ಎನ್ನುವುದು ನಮ್ಮ ಆಶಯ. ಆದರೆ, ಇಂತಹದ್ದೇ ಬಟ್ಟೆ ತೊಡಬೇಕು ಎಂದು ಹೇಳಲು ನಾನ್ಯಾರು? ಎಂದ ರಾಯರೆಡ್ಡಿ, ಕೆಲವು ಮತೀಯವಾದಿಗಳು ಮಾಧ್ಯಮಗಳಲ್ಲಿ ಅದನ್ನು ವೈಭವೀಕರಿಸುತ್ತಿದ್ದಾರೆ ಎಂದಿದ್ದರು.