ಕೊರೊನಾ ಎಫೆಕ್ಟ್; ಹೊಟ್ಟೆನೋವಿನಿಂದ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲು ನಕಾರ

ಶನಿವಾರ, 6 ಜೂನ್ 2020 (09:46 IST)
ಬೆಂಗಳೂರು : ಕೊರೊನಾ ಭೀತಿಯಿಂದ ವೈದ್ಯರು ಮಾನವೀಯ ಮರೆಯುತ್ತಿದ್ದು, ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ಕೊಡಲಿಲ್ಲ ನಕಾರ ಮಾಡಿದ ಘಟನೆ ಬೆಂಗಳೂರಿನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.


ಆಸ್ಪತ್ರೆಗೆ ಬಂದ ವ್ಯಕ್ತಿ ಹೊಟ್ಟೆನೋವಿನಿಂದ ನರಳಾಡುತ್ತಿದ್ದರೂ ಡಾಕ್ಟರ್ ಇಲ್ಲ ಎಂದ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆ ಒಳಗೂ ಬಿಡದೆ ಉದ್ಧಟತನ ಮೇರೆದಿದ್ದಾರೆ.


ರಾತ್ರಿಯಿಡಿ ಆಸ್ಪತ್ರೆ ಮುಂದೆ ರೋಗಿ ನರಳಾಟ ನಡೆಸಿದರೂ  ಆಸ್ಪತ್ರೆ ಪಕ್ಕದಲ್ಲೆ ಇದೆ ವೈದ್ಯರ ಕ್ವಾಟ್ರಸ್ ಇದ್ದರೂ ಕೂಡ ವೈದ್ಯರು ಕೊರೊನಾ  ಹೆಸರೇಳಿ ಚಿಕಿತ್ಸೆ ನೀಡಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸೆ ನೀಡದ ವೈದ್ಯರ ವಿರುದ್ಧ ಜನರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ