ಕೊರೊನಾ ಸೋಂಕು ಭೀತಿ ಹಿನ್ನಲೆ ; ಹಡಗಿನಲ್ಲಿಯೇ ಬಂಧಿಯಾದ ಕಾರವಾರದ ಯುವಕ

ಶನಿವಾರ, 8 ಫೆಬ್ರವರಿ 2020 (10:55 IST)
ಕಾರವಾರ : ‘ಕೊರೊನಾ’ ಸೋಂಕು ಭೀತಿಯಲ್ಲಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಕಾರವಾರದ ಯುವಕನೊಬ್ಬನನ್ನು ತಡೆಹಿಡಿದಿದ್ದಾರೆ.


ಅಭಿಷೇಕ್ ಜಪಾನಿನ  ಡೈಮೆಂಡ್ ಫ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ಹಡಗಿನಲ್ಲಿರುವ 40 ಜನರಿಗೆ  ‘ಕೊರೊನಾ’ ಸೋಂಕು ಹಿನ್ನಲೆ ಹಡಗಿನಲ್ಲಿ ಕೆಲಸ ಮಾಡ್ತಿರುವ ಅಭಿಷೇಕ್ ಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ  ಜಪಾನ್ ನ ಯುಕೊಮಾ ಎಂಬಲ್ಲಿ ಸಮುದ್ರದ ಮಧ್ಯೆಯೇ ಹಡಗಿಗೆ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.


ಇತ್ತ ಕಾರವಾರದಲ್ಲಿರುವ ಅಭಿಷೇಕ್ ಪೋಷಕರಲ್ಲೂ ಆತಂಕ ಮನೆಮಾಡಿದ್ದು, ಆದಕಾರಣ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ