ಇಂದು ಕಾರವಾರ ಬಂದ್ ಗೆ ಕರೆ ನೀಡಿದ ಮೀನುಗಾರರು

ಗುರುವಾರ, 16 ಜನವರಿ 2020 (10:28 IST)
ಕಾರವಾರ : ಕಡಲತೀರ ಉಳಿಸಿ ಎಂದು ಮೀನುಗಾರರು ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಬಂದ್ ಗೆ ಕರೆ ನೀಡಿದ್ದಾರೆ.


ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಯ ಹಿನ್ನಲೆ ಕಡಲತೀರದ ಮಧ್ಯೆಯೇ ಕಲ್ಲು ಹಾಕಿ ಕಾಮಗಾರಿ ಆರಂಭ ಮಾಡಿದ ಬಂದರು ಇಲಾಖೆಯ ‍ಧೋರಣೆಯನ್ನು ಖಂಡಿಸಿ ಇಂದು ಮೀನುಗಾರರು ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಂದು ಕಾರವಾರ ನಗರ ಬಂದ್ ಗೆ ಕರೆ ನೀಡಿದ್ದಾರೆ.

 

ಈ ಬಂದ್ ಗೆ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳು  ಬೆಂಬಲ ನೀಡಿದ್ದು, ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ