ವೃದ್ಧನಿಗೆ ಸೈಬರ್​ ಕಳ್ಳರ ಮಹಾ ದೋಖಾ

ಶನಿವಾರ, 8 ಜುಲೈ 2023 (18:07 IST)
ಗೃಹಜ್ಯೋತಿ ಯೋಜನೆಗೆ ಆರಂಭದ ವೇಳೆಯೇ ಸೈಬರ್ ಕಳ್ಳರ ಕಾಟ ಹೆಚ್ಚಾಗಿದೆ. ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ಸೈಬರ್​ ಕಳ್ಳರು ಜನರಿಗೆ ವಂಚನೆ ಮಾಡಿದ್ದಾರೆ. ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ 53 ಸಾವಿರ ಹಣ ಕಳೆದುಕೊಂಡಿದ್ದಾರೆ. ಮೊದಲಿಗೆ ನಾರಾಯಣ್ ಮೊಬೈಲ್ ನಂಬರ್​​ಗೆ ವಂಚಕರು ಲಿಂಕ್ ಕಳಿಸಿದ್ದಾರೆ. ಬಳಿಕ ಕರೆ ಮಾಡಿ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನೀವು ಇಂದೇ ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದರೆ ಕನೆಕ್ಷನ್ ಕಟ್ ಆಗುತ್ತೆ ಎಂದು ಸೂಚನೆ ನೀಡಿದ್ದಾರೆ.. ಇದರಿಂದ ಗಾಬರಿಯಾಗಿದ್ದ ವೃದ್ಧ ನಾರಾಯಣ್ ಪ್ರಸಾದ್ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಲಿಂಕ್​ ಮೇಲೆ ಕ್ಲಿಕ್​ ಮಾಡುತ್ತಿದ್ದಂತೆ ನಾರಾಯಣ್​ ಪ್ರಸಾದ್​ ಅವರ ಅಕೌಂಟ್​ನಿಂದ 53 ಸಾವಿರ ಹಣ ಕಟ್ ಆಗಿದೆ.. ಕಾಡುಗೋಡಿ ಪೊಲೀಸ್ ಠಾಣೆಗೆ ವೃದ್ಧ ನಾರಾಯಣ್​ ದೂರು ಸಲ್ಲಿಸಿದ್ದಾರೆ. ಪೊಲೀಸರು ವಂಚನೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ