ಡಿಕೆಶಿ ನನ್ನ ನಡುವೆ ಫೈಟ್ ಇಲ್ಲ ಎಂದ ಪ್ರಭಾವಿ ಸಚಿವ

ಬುಧವಾರ, 4 ಸೆಪ್ಟಂಬರ್ 2019 (19:18 IST)
ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ವೈರತ್ವವಿಲ್ಲ ಅವರು ತಪ್ಪಿತಸ್ಥರೆಂದು ಹೇಳಲು ಆಗುವುದಿಲ್ಲ ವಿಚಾರಣೆ ಇನ್ನು ಮುಂದುವರೆದಿದೆ ಅಂತ ಡಿಕೆಶಿ ಪರ ಮತ್ತೊಬ್ಬ ಬಿಜೆಪಿ ಶಾಸಕ, ಸಚಿವ ಮೃದು ಧೋರಣೆ ತಳೆದಿದ್ದಾರೆ.


ಡಿ ಕೆ ಶಿವಕುಮಾರ್ ವಿರುದ್ಧ ಸೇಡಿನ ರಾಜಕಾರಣ ಮಾಡುವ ಅವಶ್ಯಕತೆಯಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಡಿ.ಕೆ ಶಿವಕುಮಾರ ಬಂಧನದ ವಿಷಯಕ್ಕೆ ಪ್ರತಿಕ್ರಿಯಿಸಿ ಶಿವಕುಮಾರ್ ನನ್ನ ಒಳ್ಳೆಯ ಸ್ನೇಹಿತರು. ಅವರು ತಪ್ಪು ಮಾಡಿದ್ದಾರೆಂದು ಹೇಳಲು ಆಗುವುದಿಲ್ಲ.

ಈಡಿ ಅಧಿಕಾರಿಗಳೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಅಷ್ಟೇ. 2 ದಿನ ವಿಚಾರಣೆಗೆ ಸಹಕರಿಸಿದ್ದರೆ ಹೀಗಾಗ್ತಿರಲಿಲ್ಲ ಎಂದರು. ದೆಹಲಿಯಲ್ಲಿ ಅಷ್ಟು ಜನರನ್ನು ಸೇರಿಸುವ ಅವಶ್ಯಕತೆ ಇರಲಿಲ್ಲ.  ವಿಚಾರಣೆ ವೇಳೆ ಅವರನ್ನು ತಪ್ಪಿತಸ್ಥರೆಂದು ಹೇಳಿ ರಾಜಕಾರಣ ಮಾಡುವುದಿಲ್ಲ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ