ಸಾಲ ಮನ್ನಾ: ಸರಕಾರದಿಂದ ಮೊಸಳೆ ಕಣ್ಣೀರು-ರೈತ ಸಂಘ ಆಕ್ರೋಶ

ಶುಕ್ರವಾರ, 29 ಜೂನ್ 2018 (17:58 IST)
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜಕೀಯ ಕರ್ಮಭೂಮಿಯಲ್ಲಿ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯ ಪ್ರಬಲವಾಗಿ ಕೇಳಿಬರಲಾರಂಭಿಸಿದೆ.


ರಾಜ್ಯದ ರೈತರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಬೇಕು ಎಂದು ರಾಮನಗರದಲ್ಲಿ ರೈತರು ಒತ್ತಾಯಿಸಿದ್ದಾರೆ. 
ರೈತರ ಸಾಲ ಮನ್ನಾ ಆಗಲೇಬೇಕು. ಸಾಲದ ಹೊರೆಯಲ್ಲಿ ಅನ್ನದಾತರು ಬಾಳಲು ಸಾಧ್ಯವಿಲ್ಲ. ಸರಕಾರಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು ದೂರಿದ್ದಾರೆ. 

 
ಸಮ್ಮಿಶ್ರ ಸರಕಾರದಲ್ಲಿ ಒಳಜಗಳ ಸಾಕಷ್ಟು ಹೆಚ್ಚಾಗುತ್ತಿದೆ. ತಮ್ಮ ಒಳ ಜಗಳವನ್ನು ಬಿಟ್ಟು ರಾಜ್ಯದ ರೈತರ ಹಿತ ಕಾಯಲು ಸರಕಾರ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ