ಬೀದರ್ ಜಿಲ್ಲೆಯ ಯೋಧ ಬಸವರಾಜ್ ಉಗ್ರರ ಗುಂಡಿಗೆ ಬಲಿ

ಬುಧವಾರ, 7 ಜುಲೈ 2021 (16:53 IST)
ಬೀದರ್: ಬೀದರ್ ಜಿಲ್ಲೆಯ ಯೋಧ ಬಸವರಾಜ್  8 ವರ್ಷಗಳಿಂದ  ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಂಜಾಬ್ ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡುವಾಗ ಗುಂಡು ತಗುಲಿ ಬೀದರ್ ಜಿಲ್ಲೆ ಔರಾದ ತಾಲೂಕಿನ ಆಲೂರ ಗ್ರಾಮದ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ.
 
ಹುತಾತ್ಮ ಯೋಧ  ಪತ್ನಿ, ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸ್ವಗ್ರಾಮದಲ್ಲೇ ಯೋಧನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ