ಕುಖ್ಯಾತ ಕಳ್ಳರ ಬಂಧನ : ಇವರು ಕದ್ದಿದ್ದು ಏನೇನು ಗೊತ್ತಾ?

ಮಂಗಳವಾರ, 8 ಸೆಪ್ಟಂಬರ್ 2020 (18:28 IST)
ಕುಖ್ಯಾತ ಐವರು ಕಳ್ಳರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯಿಂದ ಕಳವು ಪ್ರಕರಣಗಳಲ್ಲಿ  ಭಾಗಿಯಾಗಿದ್ದ ಐವರು ಕಳ್ಳರನ್ನು ಬಂಧಿಸಲಾಗಿದೆ.

ಜಿಶನ್  (23) ಎಂಬ ಆರೋಪಿಯಿಂದ  88 ಸಾವಿರ ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ ಕೃಷ್ಣಮೂರ್ತಿ (42) ಬಂಧಿತ ಆರೋಪಿಯಿಂದ  1,85,500 ನಗದು ಹಣ, 41 ಗ್ರಾಂ ಬಂಗಾರದ ನಾಣ್ಯಗಳು ಮತ್ತು ಕೃತ್ಯಕ್ಕೆ ಬಳಸಿದ ಹೊಂಡಾ ಕಂಪನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಹಿರಿಯೂರು ನಗರ ಪೊಲೀಸರು ಖಾಸಿಂ ಅಲಿ ಯಾನೆ ಅಲಿ (23)ಯನ್ನು ಬಂಧಿಸಿದ್ದು, ಒಟ್ಟು 5 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳ್ಳತನ ಕೇಸ್ ಗಳಿಗೆ ಸಂಬಂಧಿಸಿದಂತೆ ಇನ್ನಿತರ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ