ಧರ್ಮಸ್ಥಳದಲ್ಲಿ ನಂದಾದೀಪ ಆರಿದ್ದು ನಿಜವಾ? ರಾಜ್ಯಕ್ಕೆ ಕಾದಿದೆಯಾ ಕಂಟಕ?

ಶುಕ್ರವಾರ, 27 ಮಾರ್ಚ್ 2020 (09:57 IST)
ಮಂಗಳೂರು: ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದಲ್ಲಿ ನಂದಾದೀಪ ಆರಿ ಹೋಗಿದೆ. ಇದರಿಂದ ರಾಜ್ಯಕ್ಕೆ ಗಂಡಾಂತರ ಕಾದಿದೆ ಎಂದು ಕೆಲವು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ.


ಮಂಜುನಾಥ ಸ್ವಾಮಿ ನಂದಾದೀಪ ಆರುವ ಮೂಲಕ ಕೇಡುಗಾಲದ ಸೂಚನೆ ನೀಡಿದ್ದಾನೆ ಎಂದು ಕೆಲವರು ಹಬ್ಬಿಸಿದ ವದಂತಿಗಳಿಂದ ಭಕ್ತರು ಆತಂಕಕ್ಕೀಡಾದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವಾಲಯ ‘ಇದು ಸಂಪೂರ್ಣ ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಈ ವರದಿಗೆ ಕಿವಿಗೊಡಬೇಡಿ. ಇದು ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡುವ ಕಿಡಿಗೇಡಿಗಳ ಯತ್ನವಷ್ಟೇ’ ಎಂದು ಪ್ರಕಟಣೆ ನೀಡಿದೆ. ಈ ನಡುವೆ ಕೊರೋನಾವೈರಸ್ ತಡೆಗೆ ಮಂಜುನಾಥ ದೇವಾಲಯದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ