ಕೈ ಪಾರ್ಟಿಯಲ್ಲಿ ಹಳಬರಲ್ಲ ಅಂತ ಮಾಜಿ ಸಚಿವ ಹೇಳಿದ್ಯಾಕೆ?

ಶನಿವಾರ, 29 ಡಿಸೆಂಬರ್ 2018 (16:35 IST)
ಕಾಂಗ್ರೆಸ್ ಪಕ್ಷದಲ್ಲಿ ಯಾರು ವಲಸಿಗರಲ್ಲ, ಯಾರು ಹಳಬರಲ್ಲ ಎಂದು ಮಾಜಿ ಸಚಿವರೊಬ್ಬರು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.  

ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಹೈಕಮಾಂಡ್ ನ‌ ಜೊತೆಗೆ ವಿಶ್ವಾಸದಲ್ಲಿ ಇರುವುದರಿಂದ 
ಅವರ ಮೇಲೆ ಹೆಚ್ಚಿ ನ ಜವಾಬ್ದಾರಿಯಿದೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಜವಾಬ್ದಾರಿಯಿದೆ. ಜಿ. ಪರಮೇಶ್ವರ್ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದಾರೆ. 8 ವರ್ಷಗಳ ಕಾಲ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. 

ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿಯವರ ಜೊತೆಗೆ ಬಹಳ ಚೆನ್ನಾಗಿದ್ದಾರೆ ಎಂದರು. 

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿರುವುದರಿಂದ ಎಂ.ಬಿ ಪಾಟೀಲ್ ಗೆ ಖಾತೆ ಬಿಟ್ಟು ಕೊಡಲಾಗಿದೆ. ಪರಮೇಶ್ವರರ ಬಳಿ ಮಹತ್ವದ ಖಾತೆಗಳಿವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ