ಭದ್ರತೆ ನೆಪದಲ್ಲಿ ಮಾನವೀಯತೆ ಮರೆತ್ರಾ ಪೊಲೀಸ್ರು?

ಗುರುವಾರ, 4 ಆಗಸ್ಟ್ 2022 (18:22 IST)
ಕೇಂದ್ರ ಗೃಹ ಸಚಿವ ಅಮಿತ್ ಷಾ ಭದ್ರತೆಗಾಗಿ ಬೆಂಗಳೂರು ಪೊಲೀಸ್ರು ಭಾರಿ ಭದ್ರತೆಯನ್ನು ಮಾಡಿಕೊಂಡಿದ್ದಾರೆ.‌ ಆದ್ರೆ ಭದ್ರತೆ ನೆಪದಲ್ಲಿ ಪೊಲೀಸ್ರು ಮಾನವೀಯತೆಯನ್ನೆ ಮರೆತ್ರಾ ಅನ್ನೊದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್ ರಸ್ತೆಯಲ್ಲಿ ವೀಲ್ ಚೇರ್ ನಲ್ಲಿ ಹಾದೂ ಹೋಗ್ತಿದ್ಸ ವೃದ್ಧ ಅಂಗವಿಕಲನ ವಾಪಸ್ ಕಳಿಸಿದ್ದಾರೆ.
ಒನ್ ವೇ ಇರೋ ಕಡೆ  ಬಂದಿದ್ದೀಯಾ ಎಂದು ವೀಲ್ ಚೇರ್ ನಲ್ಲಿ ಬಂದ ವೃದ್ಧನನ್ನೂ  ವಾಪಾಸ್ ಟ್ರಾಫಿಕ್ ಪೇದೆಯೊಬ್ರು ವಾಪಸ್ ಕಳುಹಿಸಿದ್ದಾರೆ.ಅಮಿತ್ ಶಾ ವಾಸ್ತವಿವಿದ್ದ ಹೋಟೆಲ್ ಬಳಿ ಬರುತ್ತಿದ್ದ ಅಂಗವಿಕಲ ನನ್ನ ವಾಪಸ್ ಕಳುಹಿಸಿದ್ದಾರೆ. ಈ ವಿಡಿಯೋ ನೋಡಿದ ಜನ ಪೊಲೀಸ್ರಿಗೆ ಮಾನವೀಯತೆ ಇಲ್ವಾ ಅಂತ ಪ್ರಶ್ನೆ ಮಾಡಿದ್ದರೆ.  ಇನ್ನೊಂದು ಆಯಾಮದಲ್ಲಿ ಯೋಚನೆ ಮಾಡಿದ್ರೆ ಒನ್ ವೇ ನಲ್ಲಿ ಕಾನ್ ವೇ ಬಂದ್ರೆ ವೃದ್ಧನಿಗೆ ತೊಂದರೆಯಾಗದಂತೆ ಪೊಲೀಸ್ ಎಚ್ಚರಿಕೆ ವಹಿಸಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ