ಕೇಂದ್ರ ಸಚಿವ ಸುರೇಶ್ ಅಂಗಡಿ ಕಾರು ತಡೆದು ಮಾಡಿದ್ದೇನು?

ಗುರುವಾರ, 17 ಅಕ್ಟೋಬರ್ 2019 (20:04 IST)
ಕೇಂದ್ರದ ಸಚಿವ ಸುರೇಶ್ ಅಂಗಡಿ ಕಾರನ್ನು ಜನರು ತಡೆದಿದ್ದಾರೆ.

ದಾವಣಗೆರೆ ಕೇಂದ್ರದ ಸಚಿವ ಸುರೇಶ್ ಅಂಗಡಿ ಆಗಮಿಸಿದ್ರು. ಅಶೋಕ ರೈಲ್ವೆ ಮೇಲ್ಸೆತುವೆ ಹತ್ತಿರ ನಡೆಯುತ್ತಿರೋ ಕೆಲಸವನ್ನು ಪರಿಶೀಲನೆ ನಡೆಸಿದ್ರು.

ಈ ವೇಳೆ ಆಗಮಿಸಿದ ಜನರು, ಕೇಂದ್ರ ಸಚಿವರ ಕಾರನ್ನು ತಡೆದು ತಮ್ಮ ಅಸಮಧಾನ ಹೊರಹಾಕಿದ್ರು.

ಮೇಲ್ಸೆತುವೆ ಕಾಮಗಾರಿ ವಿಳಂಬದಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಅಂತ ಒತ್ತಾಯ ಮಾಡಿದ್ರು.

ಜನರ ಸಮಸ್ಯೆ ಆಲಿಸಿದ ಕೇಂದ್ರ ಸಚಿವರು , ಬೇಗನೆ ಕಾಮಗಾರಿ ಮುಗಿಸೋವಂತೆ ಸೂಚನೆ ನೀಡೋದಾಗಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ