ವೀರಶೈವ-ಲಿಂಗಾಯತರ ವಿಂಗಡನೆ - ಸಿಎಂಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಮಂಗಳವಾರ, 13 ಮಾರ್ಚ್ 2018 (11:48 IST)
ಬಾಗಲಕೋಟೆ : ಪ್ರತ್ಯೇಕ ಲಿಂಗಾಯುತ ಧರ್ಮ ಮಾನ್ಯತೆಯ ಕುರಿತು ಬಾಳೇಹೊಸೂರ ದಿಂಗಾಲೇಶ್ವರ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.


ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿ ತಜ್ಞರು ನೀಡಿದ ವರದಿಗೆ ಮಾನ್ಯತೆ ಕೊಡಬಾರದು. ಈ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಕೂಡ ಮಾಡಬಾರದು’ ಸಿಎಂ ಎಂದು ಸಲಹೆ ನೀಡುವುದರ ಜೊತೆಗೆ ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಮೂಲಕ ವೀರಶೈವ-ಲಿಂಗಾಯತರ ವಿಂಗಡನೆಗೆ ಕಾರಣರಾಗುವ ಮೂಲಕ ಆಡಳಿತದ ಕೊನೆಯ ಗಳಿಗೆಯಲ್ಲಿ ಕಪ್ಪು ಚುಕ್ಕಿ ತಂದುಕೊಳ್ಳಬೇಡಿ. ಒಂದು ವೇಳೆ ಮಾನ್ಯತೆ ನೀಡುವುದೇ ಆದರೆ, ಮುಂದಿನ ದಿನಗಳಲ್ಲಿ ಕಹಿ ಅನುಭವ ಅನುಭವಿಸಬೇಕಾಗುತ್ತಿದೆ’ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ