ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ; ಮಾಜಿ ಕಾರ್ಪೋರೇಟರ್ ಜಾಕಿರ್ ಅರೆಸ್ಟ್

ಗುರುವಾರ, 3 ಡಿಸೆಂಬರ್ 2020 (11:20 IST)
ಬೆಂಗಳೂರು  : ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಕಾರ್ಪೋರೇಟರ್ ಜಾಕಿರ್ ನನ್ನು ಬಂಧಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಸಂಪತ್ ರಾಜ್ ನನ್ನು ಬಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಜಾಕೀರ್ ಎಸ್ಕೇಪ್ ಹಾಕಿದ್ದ.

ಇದೀಗ ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರಿಗೆ  ಜಾಕೀರ್ ಕೂಡ ಶಾಸಕರ ಮನೆಗೆ ಬೆಂಕಿ ಹಾಕಲು ಕಿಡಿಗೇಡಿಗಳನ್ನು  ಉತ್ತೇಜಿಸಿದ್ದಾರೆ ಎಂದು ತಿಳಿದುಬಂದಿದ್ದ ಹಿನ್ನಲೆಯಲ್ಲಿ  ತಡರಾತ್ರಿ ಜಾಕೀರ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ