ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು-ಡಿ.ಕೆ.ಶಿವಕುಮಾರ್ ಒತ್ತಾಯ

ಸೋಮವಾರ, 5 ಜುಲೈ 2021 (20:31 IST)
ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂದು ಮಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಮೇಕೆದಾಟು ಯೋಜನೆ ರಾಜ್ಯಕ್ಕೆ ಅತೀ ಮುಖ್ಯವಾದ ಯೋಜನೆ. ಈ ಹಿಂದೆ ನಾನು ಸಚಿವನಾಗಿದ್ದಾಗ ಕೂಡಾ ಈ ಯೋಜನೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿದ್ದೆ. ಆವಾಗ ಕೇಂದ್ರ ಪರಿಸರ ಸಚಿವಾಲಯ ಒಪ್ಪಿಗೆ ‌ನೀಡಿತ್ತು. ನಮ್ಮ ಪಾಲಿನ ನೀರು ತಮಿಳುನಾಡು ಪಾಲಾಗೋಕೆ ಬಿಡಲ್ಲ. ಮೇಕೆದಾಟು ನನ್ನ ಕ್ಷೇತ್ರದಲ್ಲೇ ಇದೆ. ಮೂರು ವರ್ಷದೊಳಗೆ ಡ್ಯಾಂ ತಯಾರು ಮಾಡಿ ಬೆಂಗಳೂರಿಗೆ ನೀರು ಕೊಡಬೇಕು. ಡಿಪಿಆರ್ ಕೂಡಾ ಈಗಾಗಲೇ ತಯಾರಾಗಿದೆ. ಯಡಿಯೂರಪ್ಪನವರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲೇ ಒಂದೇ ಸರ್ಕಾರ ಬಂದ್ರೆ ಅಭಿವೃದ್ಧಿ ಸುಲಭ ಅಂತಾ ಹೇಳಿದ್ರಿ. ನಮ್ಮ ಪಕ್ಷದಿಂದಲೂ 14 ಜನರನ್ನು ಕರೆದಿಕೊಂಡ್ರಿ. ಈಗ ನೀವು ತಮಿಳುನಾಡು ಜೊತೆ ಭಿಕ್ಷೆ ಬಿಡೋದು ಸರಿಯಲ್ಲ ಎಂದ ಅವರು, ಯಡಿಯೂರಪ್ಪನವರಿಗೆ ರಾಜಕೀಯ ಬಧ್ಧತೆ ಇರಬೇಕು. ಕೂಡಲೇ ಟೆಂಟರ್ ಕರೆದು ಕೆಲಸ ಆರಂಭ ಮಾಡಬೇಕು. ನಮ್ಮ ಭೂಮಿ,ನಮ್ಮ ಹಣ, ನಮ್ಮ‌ ನೀರು. ಯಾರನ್ನೂ ಕೇಳಿ ಮಸಾಲೆ ಅರೆಯಬೇಕಾಗಿಲ್ಲ. ಕಾಮಗಾರಿಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದರು. ಮೀನುಗಾರಿಕೆ ಇಲ್ಲದಿದ್ದರೆ ಮಂಗಳೂರಿಗೆ ಬೆಲೆ ಇಲ್ಲ. ಆರ್ಥಿಕ ಚಟುವಟಿಕೆಗೆ ಕಾರಣವೇ ಮೀನುಗಾರಿಕೆ. ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿಲ್ಲ. ಮೀನುಗಾರರಿಗೆ ಸರ್ಕಾರ ಪರಿಹಾರ ವನ್ನು ನೀಡಿಲ್ಲ. ಯಾವುದೇ ಸಬ್ಸಿಡಿಯನ್ನೂ ಮೀನುಗಾರರಿಗೆ ನೀಡಿಲ್ಲ. ಮೀನುಗಾರರಿಗೆ ಸಾಲ ನೀಡುವ ವ್ಯವಸ್ಥೆಯನ್ನೂ ಮಾಡಿಲ್ಲ. ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನು ಹಾಕಬೇಕು
ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ