ಪಕ್ಷೇತರರ ಕೈ ನೋಡೋಣ ಎಂದು ವಾರ್ನ್ ನೀಡಿದ ಡಿಕೆಶಿ

ಮಂಗಳವಾರ, 23 ಜುಲೈ 2019 (16:24 IST)
ಮೈತ್ರಿ ಸರಕಾರದ ವಿಶ್ವಾಸ ಮತದಲ್ಲಿ ಪಕ್ಷೇತರ ಹೇಗೆ ನಮಗೆ ವಿರೋಧವಾಗಿ ಮತ ಚಲಾಯಿಸುತ್ತಾರೆ ನೋಡೋಣ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಪಕ್ಷೇತರರಿಗೆ ವಾರ್ನಿಂಗ್ ನೀಡಿದ್ದಾರೆ.

ಆರ್.ಶಂಕರ್ ಮತ್ತು ನಾಗೇಶ್ ಪಕ್ಷೇತರ ಶಾಸಕರಿದ್ದಾರೆ. ಈ ಪಕ್ಷೇತರ ಶಾಸಕರನ್ನು ವಿಧಾನಸೌಧದ ಹತ್ತಿರದಲ್ಲೇ ಇರಿಸಲಾಗಿದೆ ಎಂದರು.

ಪಕ್ಷೇತರರು ಕಲಾಪಕ್ಕೆ ಬರೋದನ್ನು ಕಾಯುವೆ. ವಿಧಾನಸೌಧದಲ್ಲಿ ಸರಕಾರದ ವಿರುದ್ಧ ಏಕೆ ಮತ್ತು ಹೇಗೆ ಮತ ಚಲಾಯಿಸುತ್ತಾರೆ ನೋಡುವೆ ಎಂದು ಸವಾಲು ಹಾಕಿದ್ರು.

ಮೈತ್ರಿ ಸರಕಾರದ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೂ ಸಚಿವಸ್ಥಾನ ಕೊಡಲಾಗಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ