ಪೂಜೆ ಮಾಡಿದ್ದು ನಿಮಗಾ, ಸಿದ್ದರಾಮಯ್ಯಗಾಗಿಯಾ: ಡಿಕೆ ಶಿವಕುಮಾರ್ ಕಾಲೆಳೆದ ನೆಟ್ಟಿಗರು

Krishnaveni K

ಮಂಗಳವಾರ, 27 ಆಗಸ್ಟ್ 2024 (08:39 IST)
ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಬಂದೆರಗಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮುಡಾ ಸಂಕಷ್ಟದ ಸಮಯದಲ್ಲಿ ನಾನು ಬಂಡೆಯಂತೆ ಅವರ ಬೆನ್ನಿಗಿರುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಅದಕ್ಕೆ ತಕ್ಕಂತೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡುವಾಗ ಸಿದ್ದರಾಮಯ್ಯಗೆ ಡಿಕೆಶಿ ಜೊತೆಯಾಗಿದ್ದರು. ಭಾನುವಾರ ಪತ್ನಿ ಸಮೇತರಾಗಿ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮೊನ್ನೆ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿದ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಲವು ಖ್ಯಾತನಾಮರು ಸಂಕಷ್ಟದ ಸಮಯದಲ್ಲಿ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಇದೀಗ ಡಿಕೆ ಶಿವಕುಮಾರ್ ಕೂಡಾ ಪತ್ನಿ ಸಮೇತರಾಗಿ ಭೇಟಿಯಾಗಿದ್ದಾರೆ.

ಆದರೆ ಡಿಕೆಶಿ ಪೂಜೆ ಸಲ್ಲಿಸಿದ್ದು ಸಿದ್ದರಾಮಯ್ಯನವರಿಗಾಗಿಯೇ ತಮಗಾಗಿಯೇ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಡಿಕೆಶಿ ಸಿಎಂ ಪಟ್ಟದ ದಾರಿ ಕ್ಲಿಯರ್ ಆಗುತ್ತದೆ. ಮುಂದೆ ತಾನು ಸಿಎಂ ಆಗಬೇಕೆಂದು ಈ ಪೂಜೆ ಮಾಡಿಸಿದ್ದಾರೆಯೇ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ