ಇಂದು ಡಿಕೆಶಿಗೆ ಸಿಗುತ್ತಾ ಇಡಿ ಕಸ್ಟಡಿಯಿಂದ ಮುಕ್ತಿ?

ಮಂಗಳವಾರ, 17 ಸೆಪ್ಟಂಬರ್ 2019 (11:13 IST)
ನವದೆಹಲಿ : ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರ ಇಡಿ ಕಸ್ಟಡಿ ಇಂದು ಅಂತ್ಯವಾಗಲಿದ್ದು , ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.




ಜಾಮೀನು ಕೋರಿ ಡಿಕೆಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ದೆಹಲಿ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಲಿದ್ದು, ವಾದ ವಿವಾದದ ಬಳಿಕ ಡಿಕೆಶಿಗೆ ಜಾಮೀನು ಸಿಗುತ್ತಾ? ಇಲ್ಲವೋ? ಎಂಬ ಮಾಹಿತಿ ಹೊರಬೀಳಲಿದೆ.
ಈ ಹಿನ್ನಲೆಯಲ್ಲಿ ಡಿಕೆಶಿಯವರ ಸ್ವಕ್ಷೇತ್ರವಾದ ರಾಮಪುರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ