ಡಿಕೆಶಿ ನನ್ನನ್ನು ಸಂಪರ್ಕಿಸಿಲ್ಲ-ಸೋಮಣ್ಣ

ಮಂಗಳವಾರ, 14 ಮಾರ್ಚ್ 2023 (16:24 IST)
ಸಚಿವ V. ಸೋಮಣ್ಣ BJP ತೊರೆದು ಕಾಂಗ್ರೆಸ್‌ ಸೇರುತ್ತಾರೆಂಬ ವಿಚಾರ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಸೋಮಣ್ಣರವರಿಗೆ ವಿಜಯ ಸಂಕಲ್ಪ ರಥಯಾತ್ರೆಗೆ ಆಹ್ವಾನ ನೀಡಿರಲಿಲ್ಲ.. ಇದರ ಜೊತೆಗೆ ಟಿಕೆಟ್​ ವಿಚಾರವಾಗಿ V. ಸೋಮಣ್ಣರವರಿಗೆ ಪಕ್ಷದ ಮೇಲೆ ಅಸಮಾಧಾನವಿತ್ತು ಎನ್ನಲಾಗಿದೆ. ಈ ನಡುವೆಯೇ ಬಿಜೆಪಿಯ ನಾಯಕರು V.ಸೋಮಣ್ಣ ಜೊತೆ ಚರ್ಚೆ ಮಾಡಿ, ಅವರಲ್ಲಿನ ಅಸಮಾಧಾನ ಶಮನ ಮಾಡೋ ಪ್ರಯತ್ನವನ್ನು ಮಾಡಿದ್ದಾರೆ. ಸಭೆಯಲ್ಲಿನ ಮಾತುಕತೆಯ ನಂತರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, ಕಾಂಗ್ರೆಸ್​ ಸೇರ್ಪಡೆ ವದಂತಿಗೆ V.ಸೋಮಣ್ಣ ತೆರೆ ಎಳೆದಿದ್ದಾರೆ. ಸೋಮಣ್ಣ ಪುತ್ರನಿಗೆ ಲೋಕಸಭೆ ಟಿಕೆಟ್​ ನೀಡುವ ಭರವಸೆಯನ್ನು BJP ನೀಡಿದೆ. ಡಿಕೆಶಿ ನನ್ನನ್ನು ಕಾಂಗ್ರೆಸ್​ ಸೇರ್ಪಡೆ ವಿಚಾರವಾಗಿ ಸಂಪರ್ಕಿಸಿಲ್ಲ ಎಂದು ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ