ಧರ್ಮಗಳನ್ನು ಒಡೆಯಬೇಡಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ಬೇರ್ಪಡಿಸಬೇಡಿ-ಯು.ಟಿ ಖಾದರ್

ಶುಕ್ರವಾರ, 9 ಫೆಬ್ರವರಿ 2018 (10:56 IST)
ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರಾವಳಿ ಪ್ರವಾಸ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ  ಸಚಿವ ಯು.ಟಿ.ಖಾದರ್ ಅವರು ‘ಕಾಂಗ್ರೆಸ್ ಎಷ್ಟು ಬಲಿಷ್ಠವಿದೆ ಅಂತ ಈಗ ಗೊತ್ತಾಗ್ತಿದೆ’ ಎಂದು ಮಂಗಳೂರಿನಲ್ಲಿ ಶುಕ್ರವಾರ (ಇಂದು ) ಹೇಳಿದ್ದಾರೆ.


‘ಹೀಗಾಗಿ ಕರಾವಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಾರೆ. ರಾಜ್ಯದ ನಾಯಕರಿಂದ ಯಾವ ಕೆಲಸ ಆಗಲ್ಲ ಎಂಬ  ಕಾರಣಕ್ಕೆ ಬರ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸೋದರತೆಯಿಂದ ಒಗ್ಗಟ್ಟಿನಲ್ಲಿದ್ದೇವೆ. ಜಿಲ್ಲೆಗೆ ಬಂದು ಪ್ರಚಾರ ಮಾಡಿ ಆದರೆ ಧರ್ಮಗಳನ್ನು ಒಡೆಯಬೇಡಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ಬೇರ್ಪಡಿಸಬೇಡಿ’ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ