ತೋಟದ ಮಾಲಿಕನಿಗೆ ಹೆದರಿಸಲು ಮಾಡಿದ್ದೇನು ಗೊತ್ತಾ?

ಭಾನುವಾರ, 16 ಡಿಸೆಂಬರ್ 2018 (20:03 IST)
ತೋಟದ ಮಾಲಿಕನೊಬ್ಬನಿಗೆ ಹೆದರಿಸಲು ದುಷ್ಕರ್ಮಿಗಳು ತೋಟದ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟಿರುವ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಬಸವನ‌ ಬಾಗೇವಾಡಿ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಗನಗೌಡ ಅವರಿಗೆ ಸೇರಿದ ತೋಟದ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ಯಾರೋ ಕಿಡಿಗೇಡಿಗಳು ತೋಟದ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟಿದ್ದಾರೆ ಎಂದು ಆರೋಪ ಕೇಳಿಬಂದಿದೆ. ತೋಟದಲ್ಲಿ ಅಲ್ಲಲ್ಲಿ ಜಿಲೆಟಿನ್ ಕಡ್ಡಿಗಳನ್ನು ಕಂಡು ಭಯಭೀತನಾಗಿದ್ದಾನೆ ರೈತ. ತೋಟದ ಮನೆಯ ಗೋಡೆಗಳ ಮೇಲೆ ಹಾಗೂ ಸುತ್ತಲೂ ಜಿಲೆಟಿನ್ ಕಡ್ಡಿ ಇಟ್ಟಿರುವ ಕಿಡಿಗೇಡಿಗಳು, ತೋಟದ ಮಾಲೀಕನಿಗೆ ಹೆದರಿಸಲು ಹೀಗೆ ಮಾಡಿರಬಹುದು ಎನ್ನಲಾಗಿದೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ