ತನ್ನವರು ಸಾವನಪ್ಪಿದ್ದಕ್ಕೆ ರಜೆ ಕೇಳಿದ ಸಿಬ್ಬಂದಿಗೆ ಮ್ಯಾನೇಜರ್ ಹೇಳಿದ್ದೇನು ಗೊತ್ತಾ?

ಸೋಮವಾರ, 4 ಮಾರ್ಚ್ 2019 (13:55 IST)
ಬೆಂಗಳೂರು : ತನ್ನವರು ಸಾವನಪ್ಪಿದ್ದಕ್ಕೆ ರಜೆ ಕೇಳಿದ ಸಿಬ್ಬಂದಿಯೊರ್ವನಿಗೆ ಡಿಪೋ ಮ್ಯಾನೇಜರ್ ಸತ್ತವನ ಫೋಟೋ ತಂದರೆ ಮಾತ್ರ ರಜೆ ಮಂಜೂರು ಆಗುತ್ತದೆ ಎಂದು ಹೇಳಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಡಿಪೋ ನಂಬರ್ 33 ರಲ್ಲಿ ಸಿಬ್ಬಂದಿಯೊರ್ವನ ಸಂಬಂಧಿಕರು ಸಾವನಪ್ಪಿದ ಹಿನ್ನಲೆಯಲ್ಲಿ  ಆತ ಮ್ಯಾನೇಜರ್ ಬಳಿ ಬಂದು ರಜೆ ಕೇಳಿದ್ದಾನೆ. ಆ ವೇಳೆ ಮ್ಯಾನೇಜರ್ ಮಾನವೀಯತೆ ಮರೆತು ರಜೆ ಕೊಡದೇ ಸತಾಯಿಸಿ, ಶವದ ಜೊತೆ ನೀವಿರುವ ಫೋಟೊವನ್ನು ತಂದು ಕೊಟ್ಟರೆ ರಜೆ ಮಂಜೂರು ಮಾಡುವುದಾಗಿ ಹೇಳಿದ್ದಾನೆ.

 

ಇದರಿಂದ ಬೇಸರಗೊಂಡ ಸಿಬ್ಬಂದಿ ಶವದ ಜೊತೆ ನಾವು ಹೇಗೆ ಫೋಟೋ ತೆಗೆದುಕೊಳ್ಳಲಿ ಎಂದು ತನ್ನ  ಅಳಲನ್ನು ತೋಡಿಕೊಳ್ಳುತ್ತಾ ಡಿಪೋ ಮ್ಯಾನೇಜರ್ ವಿರುದ್ಧ ಮೇಲಾಧಿಕಾರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ