ಡೋಣಿ ಪ್ರವಾಹಕ್ಕೆ ಏನಾಗಿದೆ ಗೊತ್ತಾ?
ಡೋಣಿ ಪ್ರವಾಹಕ್ಕೆ ಇನ್ನಿಲ್ಲದ ಹಾನಿ ಸಂಭವಿಸಿದ್ದು, ಜನರು ಕಂಗಾಲಾಗಿದ್ದಾರೆ.
ತಾಳಿಕೋಟೆ ತಾಲೂಕಿನ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಳಿಕೋಟೆ ಪಟ್ಟಣದ ಹೊರ ಭಾಗದ ಹನುಮಾನ ಮಂದಿರವು ಜಲಾವೃತ ಗೊಂಡಿದೆ.
ಡೋಣಿ ನದಿಯಲ್ಲಿ ನೀರು ಏರಿಕೆ ಹಾಗೂ ಮಳೆಯಿಂದಾಗಿ ಜಮೀನುಗಳು ಕೆರೆಗಳಂತಾಗಿವೆ.
ವಿವಿಧ ಬೆಳೆಗಳು ತಮ್ಮ ಕಣ್ಮುಂದೆ ಜಲಾವೃತಗೊಂಡು ಬೆಳೆ ಹಾನಿಯಾಗುತ್ತಿರುವುದನ್ನ ಕಂಡ ರೈತರು ಕಂಗಾಲಾಗಿದ್ದಾರೆ.