ಮಾಜಿ ಸಿಎಂ ಗೆದ್ದ ಕ್ಷೇತ್ರದಲ್ಲಿ ಶಾಲೆ ಹೇಗಿದೆ ಗೊತ್ತಾ?

ಶುಕ್ರವಾರ, 17 ಆಗಸ್ಟ್ 2018 (21:55 IST)
ಮಾಜಿ ಸಿಎಂ ಹಾಗೂ ಬದಾಮಿ ಶಾಸಕರಾಗಿರುವ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಶಾಲೆಯೊಂದು ಅಧೋಗತಿಗೆ ಬಂದಿದೆ. ಈಗಾಗಲೇ ಎರಡು ಮೂರು ಬಾರಿ ಭೇಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಗೊತ್ತೇ ಇಲ್ವಾ....? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ  ಜಿಲ್ಲೆಯ  ಬದಾಮಿ  ತಾಲ್ಲೂಕಿನ  ಗುಳೇದಗುಡ್ಡ  ನಗರದ ನಡುವಿನಪೇಟೆ ಶಾಲೆ ದುಸ್ಥಿತಿಯಲ್ಲಿದೆ.

ಸುಮಾರು 3 ರಿಂದ 4 ವರ್ಷ ದುರಸ್ತಿಯಾಗುತ್ತಿಲ್ಲ  ಎಂದು ವಿದ್ಯಾರ್ಥಿಗಳು  ಮತ್ತು  ಶಿಕ್ಷಕರು ದೂರುತ್ತಿದ್ದಾರೆ.
ಶಾಲೆಯ ದುರಸ್ತಿಗಾಗಿ ಸುಮಾರು 50 ಸಾವಿರ ರೂ.  ಇಡಲಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಹೇಳಿದ್ದಾರೆ .
ಮಂಜೂರು  ಆದ ಕೂಡಲೇ  ಅದನ್ನು  ದುರಸ್ತಿ ಮಾಡಲಾಗುತ್ತದೆ  ಎಂದು  ಹೇಳಿದ್ದಾರೆ.

ಹಣ ಮಂಜೂರಾಗುವವರೆಗೂ ಶಾಲೆಯ ಮತ್ತು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪಾಡು ಆ ದೇವರಿಗೆ  ಗತಿ ಎನ್ನುವಂತಾಗಿದೆ. ಮಳೆಗಾಲದಲ್ಲಿ ಮಕ್ಕಳು ಮತ್ತು ಶಿಕ್ಷಕರು ಜೀವವನ್ನು ಕೈಯಲ್ಲಿ ಹಿಡಿದು ಹಾಳಾದ ಕಟ್ಟಡದಲ್ಲಿ ಕಲಿಯಬೇಕಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ