ಅವರು ಯಾರ ಸಮಾಧಿಗೆ ಪೂಜೆ ಸಲ್ಲಿಸಿದ್ರು ಗೊತ್ತಾ?

ಸೋಮವಾರ, 18 ಫೆಬ್ರವರಿ 2019 (16:14 IST)
340 ವರ್ಷಗಳ ಕೆಳಗೆ ಹುತಾತ್ಮರಾದವರ ಸಮಾಧಿಗೆ ಅವರ ವಂಶಸ್ಥರು ಪೂಜೆ ಸಲ್ಲಿಸಿದ್ದಾರೆ.

ಚಿತ್ರದುರ್ಗದಲ್ಲಿ ಬಿಚ್ಚಗತ್ತಿ ಭರಮಣ್ಣ ನಾಯಕ ಮತ್ತು ಹಿರೇಮದಕರಿ ನಾಯಕನನನ್ನು ನೆನಪು ಮಾಡಿಕೊಳ್ಳಲಾಗಿದೆ. ಆ ಇಬ್ಬರ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ.

ಚಿತ್ರದುರ್ಗದ ಮದಕರಿ ನಾಯಕನ ವಂಶಸ್ಥರು ಮತ್ತು ನಾಯಕ ಸಮುದಾಯದ ಯುವಕರು, ಸಮಾಧಿಗಳಿಗೆ ಪೂಜೆ ಮಾಡಿ ನಮನ ಸಲ್ಲಿಕೆ ಮಾಡಿದ್ದಾರೆ.

340 ವರ್ಷಗಳ ಕೆಳಗೆ ವಿವಿಧ  ಯುದ್ಧಗಳಲ್ಲಿ ಇಬ್ಬರೂ ವೀರರು ಸಾವನ್ನಪ್ಪಿದ್ದರು.  ಇಬ್ಬರು ವೀರರ ಸಮಾಧಿಯು ಚಿತ್ರದುರ್ಗ ಕೋಟೆಯ ಹೊರಭಾಗದಲ್ಲಿವೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ