ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಆವರಣದಲ್ಲೇ ಹೆರಿಗೆ

ಶನಿವಾರ, 1 ಜೂನ್ 2019 (17:16 IST)
ವೈದ್ಯರ ನಿರ್ಲಕ್ಷಕ್ಕೆ ಆಸ್ಪತ್ರೆ ಆವರಣದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಆವರಣದಲ್ಲಿ ಘಟನೆ ಇದಾಗಿದೆ.

ಡಾಕ್ಟರ್ ಇಲ್ಲ, ಹೆರಿಗೆ ಆಗುವುದಿಲ್ಲ ಎಂದು ವಾಪಸ್ ಕಳುಹಿಸಿದ್ದರು ನರ್ಸ್ ಗಳು.

ಆದರೆ ಆಸ್ಪತ್ರೆಯ ಬಾಗಿಲಿನಲ್ಲಿ ಹೆರಿಗೆಯಾಗಿದೆ ಗರ್ಭಿಣಿಗೆ. ಹಂಪಯ್ಯನಮಾಳೀಗೆ ಗೊಲ್ಲರಹಟ್ಟಿ ಮಹಿಳೆ ಪುಷ್ಪ (23) ಮಗುವಿಗೆ ಜನ್ಮನೀಡಿದವರು.

ದಯಾನಂದ್ ಎಂಬುವವರ ಪತ್ನಿ ಪುಷ್ಪ, ನರ್ಸ್ ಗಳ ನಿರ್ಲಕ್ಷದಿಂದಾಗಿ ಆಸ್ಪತ್ರೆ ಬಾಗಿಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್
ಗರ್ಭಿಣಿ ಮಹಿಳೆಗೆ ಸಹಾಯ ಮಾಡಿ ಮಾನವೀಯತೆ ಮೆರೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ