ಅವರಿಂದಾಗಿ ನಾವು ಇಂದು ವಿಧಾನ ಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೇಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು
ಸುವ್ಯವಸ್ಥೆ, ಶಾಂತಿ ಸಮೃದ್ಧಿ ಇರುತ್ತಿರಲಿಲ್ಲ ಎಂದರು.
ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿರುವಂಥದ್ದು. ಬೇರೆ ದೇಶಗಳ ಸಂವಿಧಾನಗಳಿಗಿಂತ ಹೆಚ್ವು ಜನಪರ, ಮಾನವೀಯ ಗುಣಗಳಿರುವ, ದೇಶವನ್ನು ಕಟ್ಟುವ ಸಂವಿಧಾನ. ಹಾಗಾಗಿ ವಿಶ್ವಕ್ಕೆ ಮಾದರಿ ಎನಿಸುವ ಸಂವಿಧಾನ ನಮ್ಮದು.ಜನರು ನಿರಂತರವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ನಾವು ಕೇವಲ ಮತ ಹಾಕಿದ್ರೆ ಸಾಲು. ಮತ ಹಾಕಿದ ಮೇಲೆ ವ್ಯವಸ್ಥೆ ಜನಪರವಾಗಿನಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲದೇ, ಸಾಮಾನ್ಯ ಜನರೂ ಮಾಡಬೇಕು. ಅದನ್ನು ಮಾಡಿದಾಗ ದೇಶ ಸಮೃದ್ಧಿ ಗೊಂದಲು ಸಾಧ್ಯ. ಅದು ಪಾಲುಗೊಳ್ಳುವಿಕೆಯ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ಅದು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಯಕೆ ಆಗಿತ್ತು. ಅವರ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಪ್ಪಿ ಸಂವಿಧಾನದನ್ವಯ ಆಡಳಿತ ಮಾಡುತ್ತಿದ್ದೇವೆ. ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನಿಮ್ಮ ನೆಚ್ಚಿನ ಧರ್ಮಗ್ರಂಥ ಯಾವುದೆಂದು ಕೇಳಿದಾಗ ಅವರು ಸಂವಿಧಾನವೇ ನನ್ನ ಧರ್ಮ ಗ್ರಂಥ ಎಂದು ಹೇಳಿದ್ದಾರೆ. ನಮ್ಮ ನಾಯಕರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.