ಕಾಂಗ್ರೆಸ್ ನಾಯಕರ ವಿರುದ್ಧ ಸಿ‌ಟಿ‌ ರವಿ ವಾಗ್ದಾಳಿ

ಗುರುವಾರ, 20 ಜುಲೈ 2023 (16:34 IST)
ವಿಧಾನಸೌದದಲ್ಲಿ ಮಾತನಾಡಿದ ಸಿಟಿ ರವಿ ಸಿದ್ದರಾಮಯ್ಯ ಲೆಕ್ಕಾಚಾರದಲ್ಲಿ ಅವರ ಮೂಗಿನ ನೇರಕ್ಕೆ ಸಂವಿಧಾನ.2010ರಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕರು ಉಚ್ಚಾಟಿತ ಶಾಸಕರನ್ನು ಒಳಗಡೆ ಬಿಟ್ಟಿಲ್ಲ ಅಂತ ವಿಧಾನಸೌಧದ ಡೋರ್ ನ್ನು ಒದ್ದಿದ್ದವ್ರು.ಯಾವ ಸಂವಿಧಾನದ ಅಡಿಯಲ್ಲಿ ಅಂದು ಡೋರ್ ಒದ್ದವ್ರು.ಸ್ಪೀಕರ್ ಮೈಕ್ ಕಿತ್ತಾ ಹಾಕಿದ್ದವ್ರು ಡಿ‌.ಕೆ. ಶಿವಕುಮಾರ್,ಹಾಗಾದರೆ ಇದು ಯಾವ ರೀತಿಯ ಸಂವಿಧಾನ..?ವಿಷಯಾಂತರ ಮಾಡೋಕೆ ನಮ್ಮ ಶಾಸಕರನ್ನು ಸಸ್ಪಂಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ
 
IAS ಅಧಿಕಾರಿಗಳನ್ನು ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡು ಅದನ್ನು ಚರ್ಚೆ ಮಾಡ್ತಾರೆ ಅಂತ ವಿಷಯಾಂತರ ಮಾಡೋಕೆ,ಶಾಸಕರ ಸಸ್ಪಂಡೆ ಮಾಡಿದ್ದಾರೆನಿಮ್ಮ ಕಾರ್ಯಕರ್ತರು ಹಾಗೂ ಶಾಸಕರ ಜೊತೆಗೆ ಸೇವೆ ಮಾಡ್ಸಿ.ನಿಮಗೆ ಶಾಸಕರ ಸಂಖ್ಯೆ ಕಡಿಮೆ ಇತ್ತಾ..?ಅವರ ಹತ್ತಿರ ಸೇವೆ ಮಾಡ್ಸಬಹುದಿತ್ತಲ್ವಾ..?ಅನ್ನದಾತರ ಆತ್ಮಹತ್ಯೆ ಆಗ್ತಿದೆ, ರಾಜ್ಯದಲ್ಲಿ ಸರಣಿ ಕೊಲೆ ಆಗ್ತಿದೆ.ಇದ್ಯಾವ ಚರ್ಚೆ ಅವರಿಗೆ ಬೇಡ ಅಂತಾ ಸಿಟಿ ರವಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ