ನೂತನ ಶಾಸಕರಿಗೆ ಹಿರಿಯರ ನೀತಿಪಾಠ

ಸೋಮವಾರ, 26 ಜೂನ್ 2023 (17:00 IST)
ಇಂದಿನಿಂದ ಮೂರು ದಿನಗಳ ಕಾಲ ನೆಲಮಂಗಲದ ಬಳಿಯ ಕ್ಷೇಮವನದಲ್ಲಿ ತರಬೇತಿ ಶಿಬಿರ ನಡೆಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿರುವಂತಹ ನೂತನ ಶಾಸಕರಿಗೆ ಹಿರಿಯರು ನೀತಿಪಾಠ ಮಾಡಲಿದ್ದಾರೆ. ಸದನದೊಳಗೆ ಹೇಗೆ ವರ್ತಿಸಬೇಕು? ಸದನದ ಕಾರ್ಯಕಲಾಪಗಳೇನು? ಹೊಸ ಶಾಸಕರ ಜವಾಬ್ದಾರಿಗಳೇನು? ಕ್ಷೇತ್ರದ ಸಮಸ್ಯೆ ಬಗ್ಗೆ ಗಮನ ಸೆಳೆಯುವುದೇಗೆ? ಸದನದ ನೀತಿ ನಿಯಮಗಳೇನು? ಅಲ್ಲಿ ನಡೆಯೋ‌ ಚರ್ಚೆಗಳೇನು, ಹೇಗೆ ಭಾಗಿಯಾಗಬೇಕು? ನಿಯಮಗಳ ಶಿಸ್ತು ರೂಡಿಸಿಕೊಳ್ಳುವುದು ಹೇಗೆಂದು ಹಿರಿಯರು ಹೊಸಬರಿಗೆ ನೀತಿ ಪಾಠ ಮಾಡಲಿದ್ದಾರೆ. ವಿಧಾನಸಭೆ ಸ್ಪೀಕರ್ ವತಿಯಿಂದ ಕಾರ್ಯಕ್ರಮವನ ಆಯೋಜಿಸಿದ್ದು. ಸಿಎಂ ಸಿದ್ದರಾಮಯ್ಯ, ಹಿರಿಯ ಸಚಿವರು ಹೊಸ ಶಾಸಕರಿಗೆ ನೀತಿ ಪಾಠ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ