ಹಣವಿಲ್ಲದಿದ್ರೂ ಕೈಲಾಸಕ್ಕೆ ಹೋದ್ರೆ ಕೈತುಂಬಾ ಸಂಬಳ!

ಸೋಮವಾರ, 14 ನವೆಂಬರ್ 2022 (13:17 IST)
ಕೈಲಾಸ : ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ನಿತ್ಯಾನಂದ ಇದೀಗ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶವಿದೆ ಎಂದು ಹೇಳುತ್ತಿದ್ದಾರೆ.
 
ಹೌದು.. ಹಿರಿಯರು ಕಾಸಿದ್ರೆ ಕೈಲಾಸ ಎನ್ನುತ್ತಿದ್ದರು. ಆದರೆ ನಿತ್ಯಾನಂದ ಹಣ ಇಲ್ಲದಿದ್ದರೂ ಕೈಲಾಸಕ್ಕೆ ಕರೆ ಮಾಡಿ, ಕೈತುಂಬಾ ಹಣ ಬರುವ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ನಿತ್ಯಾನಂದನೇ ನಿರ್ಮಿಸಿರುವ ಕೈಲಾಸ ದೇಶದಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆಯಂತೆ. ವಿವಿಧ ರೀತಿಯ ಉದ್ಯೋಗಗಳಿವೆ. ಅರ್ಹ ಮತ್ತು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಉದ್ಯೋಗಕ್ಕೆ ಸೇರುವವರಿಗೂ ಉದ್ಯೋಗದ ಜೊತೆಗೆ ಆಕರ್ಷಕ ವೇತನ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಕೈಲಾಸದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ