ನಾನು 24*7 ರಾಜಕಾರಣಿ ಕಣ್ರೀ, ಬೇರೆಯವರಂತಲ್ಲ: ದೇವೇಗೌಡ

ಬುಧವಾರ, 18 ಮೇ 2016 (16:14 IST)
ಇನ್ನೂ ಮುಂದೆ ವಿನಾಕಾರಣ ಕಾಲಹರಣ ಮಾಡುವುದಿಲ್ಲ. ರಾಜ್ಯದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜಿಡಿಎಸ್‌ ವರಿಷ್ಠ ಎಚ್‌.ಡಿ. ದೇವೆಗೌಡರು ಹೇಳಿದ್ದಾರೆ.
 
ತಿರುಪತಿಯಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ದೇವೆಗೌಡರು, ತಮ್ಮ 84 ನೇ ಜನ್ಮದಿನವನ್ನು  ಅಭಿಮಾನಿಗಳೂಂದಿಗೆ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ಇನ್ಮುಂದೆ ವಿನಾಕಾರಣ ಕಾಲಹರಣ ಮಾಡದೆ, ರಾಜ್ಯದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆ.
 
ನನಗೆ ದೈವದಲ್ಲಿ ನಂಬಿಕೆ ಇದೆ. ಪಕ್ಷದ ಕಾರ್ಯಕರ್ತರ ಬೆಂಬಲದಿಂದ ರಾಜ್ಯಾದ್ಯಂತ ಪ್ರವಾಸ ಕೈಕೊಳ್ಳುತ್ತೇನೆ. ಜೀವನದಲ್ಲಿ ನನಗೆ ನಿವೃತ್ತಿ ಇಲ್ಲ. ನಾನು 24*7 ರಾಜಕಾರಣಿ, ಕೊನೆಯವರೆಗೂ ರಾಜಕೀಯದಲ್ಲಿ ಇದ್ದು, ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ