ವಿದ್ಯುತ್ ತಂತಿ ಕಡಿದು ಅನ್ನದಾತ ಆತ್ಮಹತ್ಯೆ

ಸೋಮವಾರ, 27 ಫೆಬ್ರವರಿ 2017 (08:56 IST)
ವಿದ್ಯುತ್ ಪ್ರವಹಿಸುತ್ತಿದ್ದ  ತಂತಿ ಬಾಯಲ್ಲಿಟ್ಟುಕೊಂಡು ರೈತ ಆತ್ಮಹತ್ಯೆಗೆ ಶರಣಾದ ಘಟನೆ ಸಿಂಧನೂರು ತಾಲ್ಲೂಕಿನ ಚಿತ್ರಾಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೃತ ಸಿದ್ದಯ್ಯಸ್ವಾಮಿ ಶರಣಯ್ಯ ಸ್ವಾಮಿ (48) ಗೆ 8 ಎಕರೆ ಜಮೀನಿದ್ದು ಎರಡು ವರ್ಷಗಳಿಂದ ಕಾಡುತ್ತಿರುವ ಬರಕ್ಕೆ ಅಪಾರ ಪ್ರಮಾಣದ ನಷ್ಟವನ್ನು ಕಂಡಿದ್ದರು. ಬ್ಯಾಂಕ್‌ನಲ್ಲಿ 8 ಲಕ್ಷ ಮತ್ತು 4 ಲಕ್ಷ ಖಾಸಗಿ ಸಾಲ ಮಾಡಿಕೊಂಡಿದ್ದ ಅವರು ಸಾಲದಾತರ ಕಾಟಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ