ನಮಗೆ ನಿಮ್ಮ ಕಸ ಬೇಡ

ಗುರುವಾರ, 16 ಡಿಸೆಂಬರ್ 2021 (15:42 IST)
ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸಿ ಅಂತಿಮ ನಿರ್ಧಾರ ಆಗುವವರೆಗೂ MSGP ಘಟಕಕ್ಕೆ ಕಸದ ಲಾರಿಗಳನ್ನು ಕಳುಹಿಸುವುದಿಲ್ಲ ಎಂಬ ಭರವಸೆ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಆದರೆ ರೈತರ ಕಣ್ಣು ತಪ್ಪಿಸಿ MSGP ಘಟಕದ ಲಾರಿಯೊಂದು ತ್ಯಾಜ್ಯ ತುಂಬಿಕೊಂಡು ಬಂದ ತಕ್ಷಣ ಕಾವಲಿನಲ್ಲಿದ್ದ ರೈತರ ಕೈಗೆ ಸಿಕ್ಕಿಬಿದ್ದಿದೆ.ಕೂಡಲೇ ಹೆಚ್ಚತ್ತ ಸುತ್ತಮುತ್ತಲಿನ ಗ್ರಾಮಗಳ ರೈತರು MSGP ಲಾರಿಯೊಂದು ತ್ಯಾಜ್ಯ ತುಂಬಿಕೊಂಡು ಮೂಗೇನಹಳ್ಳಿ ಕ್ರಾಸ್ ಬಳಿ ಬಂದ ತಕ್ಷಣ ಲಾರಿಯನ್ನು ತಡೆದು ಬೆಂಕಿ ಇಡುವ ಹೆಚ್ಚರಿಕೆ ನೀಡಿದ್ದಾರೆ.
 
ರೈತರ ಆಕ್ರೋಶ : ಲಾರಿ ಬಂದ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ರೈತರು ಲಾರಿಗೆ ಬೆಂಕಿ ಹಚ್ಚುವ ಎಚ್ಚರಿಕೆನೀಡಿದರು. ನಂತರ ಸ್ಥಳಕ್ಕೆ ಬಂದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್, ರೈತರನ್ನು ಸಮಾಧಾನಪಡಿಸಿ, ಲಾರಿಯನ್ನು ಮತ್ತೆ ಈ ಕಡೆ ಬರದಂತೆ ಎಚ್ಚರಿಕೆ ಕೊಟ್ಟು ವಾಪಸ್ ಮರಳುವಂತೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ