ರೈತ ಸಂಘದ ಕಾರ್ಯದರ್ಶಿ ಪ್ರತೀಶ್ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ರೈತರ ಧರಣಿ

ಶುಕ್ರವಾರ, 23 ಸೆಪ್ಟಂಬರ್ 2022 (21:05 IST)
ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮೇಲೆ ಇದೇ ತಿಂಗಳ 9 ರಂದು ಬೆಳಗ್ಗೆ 6:40ರ ಸಮಯದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು ಈ ಕ್ರತ್ಯ ವನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿಡ್ಲಘಟ್ಟ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
 
ಭಕ್ತರಹಳ್ಳಿ ಪ್ರತೀಶ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ತಲೆ ಎಡಭಾಗಕ್ಕೆ ಮಚ್ಚಿನಿಂದ ಹೊಡೆದು ಬೆನ್ನಿಗೆ ಚಾಕುನಿಂದ ಬಲವಾಗಿ ಹಾಗೂ ಎದೆ ಭಾಗದಲ್ಲಿ ಆರು ಬಾರಿ ಚಾಕುವಿನಿಂದ ಹರಿದಿದ್ದು ಪ್ರಸ್ತುತ ಪ್ರತೀಶ್ ರವರು ಸ್ಥಿತಿ ಚಿಂತಾಜನಕವಾಗಿರುತ್ತದೆ ಕುಟುಂಬದ ಮಹಿಳೆಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ,ಹಲ್ಲೆ ಮಾಡಿರುವಂತಹ ಆರೋಪಿಗಳು ಅದೇ ಗ್ರಾಮದ  ಉದಯ್ಕುಮಾರ್
,ರಾಮಚಂದ್ರಪ್ಪ,ಹೇಮಂತ್,ಗೋವಿಂದಪ್ಪ,ನಂದೀಶ್ ಎಂಬವರ ಪೈಕಿ ಇಬ್ಬರನ್ನು ಮಾತ್ರ ಪೊಲೀಸರು ಬಂಡಿಸಿರುತ್ತಾರೆ.ಆದರೆ ಉಳಿದ ಹಲ್ಲೇ ಕೋರರು ಮತ್ತು ಸಫಾರಿ ಕೋರರನ್ನು ಇನ್ನು ಬಂಧಿಸಿರುವುದಿಲ್ಲ.ಅದರಿಂದ ಉಳಿದ ಹಲ್ಲೇ ಕೊರರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ಕರ್ನಾಟಕ ರಾಜ್ಯದ್ಯಂತ ಉಗ್ರ ಹೋರಾಟ ಮಾಡುತ್ತವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎಚ್ಚರಿಕೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ