ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿಯಿಂದಯಿಂದ ಬಿರುಸಿನ ಪ್ರಚಾರ

ಶುಕ್ರವಾರ, 5 ಮೇ 2023 (18:50 IST)
ಕರ್ನಾಟಕ ಪ್ರಜಾಪ್ರಭುತ್ವ ಹಬ್ಬಕ್ಕೆ ಕೇವಲ ಆರು ದಿನಗಳು ಮಾತ್ರ ಬಾಕಿ ಇದ್ದು,ಈ ಮಧ್ಯ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬರಪೂರ ಪ್ರಚಾರದಲ್ಲಿ ತೊಡಗಿದ್ದಾರೆ... ಅದೇ ರೀತಿ ಇಂದು ಕೂಡ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಕಾಂಗ್ರೆಸ್ ಅಭ್ಯರ್ಥಿಯಾದ ಕೇಶವಮೂರ್ತಿಯವರು ಮಹಾಲಕ್ಷ್ಮಿ ಲೇಔಟ್ ನ ಎಲ್ಲಾ ವಾರ್ಡ್ ಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ್ರು... ಇನ್ನು ಕೇಶವ್ ಮೂರ್ತಿಯವರಿಗೆ ಮಾಜಿ ಕಾರ್ಪೊರೇಟರ್ಸ್ಗಳು ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಸಾತ್ ನೀಡಿದರು... ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.. ಇಲ್ಲಿನ ಜನರು ಕೂಡ ಸಾಕಷ್ಟು ಬದಲಾವಣೆ ಬಯಸ್ತಾ ಇದ್ದಾರೆ ಹಾಗಾಗಿ ಇಲ್ಲಿನ ಎಲ್ಲಾ ಮತದಾರರು ಕಾಂಗ್ರೆಸ್ ಅಭ್ಯರ್ಥಿಯಾದ ಕೇಶವಮೂರ್ತಿಯವರಿಗೆ ಮತ ನೀಡಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ