ಮಾಜಿ ಶಾಸಕ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಸ್ಪರ ಭೇಟಿ

geetha

ಸೋಮವಾರ, 26 ಫೆಬ್ರವರಿ 2024 (19:00 IST)
ಬೆಂಗಳೂರು :ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದ ವಿ. ಸೋಮಣ್ಣ ಬಳಿಕ ಸ್ಥಾನಮಾನಕ್ಕಾಗಿ ಹಲವು ಬಾರಿ ಹೈಕಮ್ಯಾಂಡ್‌ ಗೆ ಬೇಡಿಕೆಯಿಟ್ಟಿದ್ದರು. ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ ರಾಜ್ಯಾಧ್ಯಕ್ಷ ಸ್ಥಾನ ಬಿ.ವೈ. ವಿಜಯೇಂದ್ರ ಪಾಲಾದ ಬಳಿಕ ಬಿಜೆಪಿಯಿಂದ ದೂರವುಳಿದು ಕಾಂಗ್ರೆಸ್‌ ನಾಯಕರೊಡನೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರು. 
 
ಬಳಿಕ ಹೈಕಮ್ಯಾಂಡ್‌ ನಾಯಕರ ಭೇಟಿಯ ಬಳಿಕ ಈಗ ವಿ. ಸೋಮಣ್ಣ ಲೋಕಸಭಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸೋಮಣ್ಣ, ಇಂದು ವಿಜಯೇಂದ್ರ ಜೊತೆ ಭೇಟಿಯ ವೇಳೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. 

ಮಾಜಿ ಶಾಸಕ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಪರಸ್ಪರ ಭೇಟಿಯಾದರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಾಜಿ ಸಚಿವ ಗೋಪಾಲಯ್ಯ ಅವರ ಪುತ್ರನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದ ವೇಳೆ ಈ ಆಕಸ್ಮಿಕ ಭೇಟಿ ನಡೆಯಿತು. ಮಾಜಿ ಶಾಸಕ ಸಿ.ಟಿ. ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಭೇಟಿಯಲ್ಲಿ ಜೊತೆಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ