ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ಬಿಡುವುದಿಲ್ಲ: ಸಿಎಂ

ಬುಧವಾರ, 10 ಮೇ 2017 (18:33 IST)
ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಎಸ್‌ಎಂಕೆ, ಶ್ರೀನಿವಾಸ್ ಪ್ರಸಾದ್ ವೈಯಕ್ತಿಕ ಕಾರಣಗಳಿಂದ ಪಕ್ಷ ತೊರೆದಿದ್ದಾರೆ. ಆದ್ರೆ ವಿಶ್ವನಾಥ್ ಪಕ್ಷ ಬಿಡುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದರು. 
 
ಮೊದಲಿನ ಥ್ರಿಲ್ ಈಗಿಲ್ಲ ಎನ್ನುವ ವಿಶ್ವನಾಥ್ ಹೇಳಿಕೆಗೆ ಟಾಂಗ್ ನೀಡಿದ ಅವರು, ಆವಾಗ್ಯಾಕೆ ರೋಮಾಂಚನವಾಯಿತು ಇವಾಗ್ಯಾಕೆ ಯಾಕೆ ಆಗ್ತಿಲ್ಲ ಅನ್ನುವುದನ್ನು ಅವರನ್ನೇ ಕೇಳಿ ಎಂದು ಸುದ್ದಿಗಾರರ ಮುಂದೆ ನಗೆಚಟಾಕಿ ಹಾರಿಸಿದರು.
 
ನಾನು ಲಿಂಗಾಯಿತ ವಿರೋಧಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ ಎನ್ನುವದರಲ್ಲಿ ಸತ್ಯಾಂಶವಿಲ್ಲ. ಅವರು ಆ ರೀತಿ ಹೇಳಿಲ್ಲ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ