ಮೊಬೈಲ್ ವಿಚಾರಕ್ಕೆ ಜಗಳ: ಸ್ನೇಹಿತನ ಕೊಲೆ

ಬುಧವಾರ, 16 ಫೆಬ್ರವರಿ 2022 (10:11 IST)
ಬೆಂಗಳೂರು: ಮೊಬೈಲ್ ವಿಚಾರವಾಗಿ ಸ್ನೇಹಿತರಿಬ್ಬರು ಜಗಳವಾಡಿದ್ದು, ಓರ್ವ ಸ್ನೇಹಿತನ ಸಾವಿನಲ್ಲಿ ಅಂತ್ಯವಾಗಿದೆ.

36 ವರ್ಷದ ಮಂಜುನಾಥ್ ಕೊಲೆಗೀಡಾದ ವ್ಯಕ್ತಿ. ಮಂಜುನಾಥ್ ಮತ್ತು ಸ್ನೇಹಿತ ಶರತ್ ಕುಮಾರ್ ನಡುವೆ ಜಗಳವಾಗಿತ್ತು. ಕಂಠಪೂರ್ತಿ ಮದ್ಯ ಸೇವಿಸಿದ್ದ ಮಂಜುನಾಥ್, ಆರೋಪಿ ಶರತ್ ಬಳಿ ಹೋಗಿ ಮೊಬೈಲ್ ಕೊಡುವಂತೆ ಕೇಳಿದ್ದ. ಕೊಡದೇ ಇದ್ದಾಗ ಇಬ್ಬರ ನಡುವೆ ಜಗಳವಾಗಿತ್ತು.

ಇದು ವಿಕೋಪಕ್ಕೆ ತಿರುಗಿ ಆರೋಪಿ ಶರತ್ ಸಿಮೆಂಟ್ ಇಟ್ಟಿಗೆಯಿಂದ ಶರತ್ ಗೆ ಹೊಡೆದಿದ್ದ. ಪರಿಣಾಮ ಮಂಜುನಾಥ್ ಸಾವನ್ನಪ್ಪಿದ್ದಾನೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ