ಅಂತ್ಯಕ್ರಿಯೆ : ಮನೆಗೆ ಹಾಕಿದ್ದ ಬೀಗ ಮುರಿದು ಕಳ್ಳತನ!

ಶನಿವಾರ, 18 ಫೆಬ್ರವರಿ 2023 (09:23 IST)
ಹಾಸನ : ಅಂತ್ಯಕ್ರಿಯೆಗೆ ಹೋಗಿದ್ದವರ ಮನೆಗೆ ಹಾಕಿದ್ದ ಬೀಗ ಮುರಿದು 99,500 ರೂ. ಬೆಲೆ ಬಾಳುವ ಚಿನ್ನ -ಬೆಳ್ಳಿಯ ಆಭರಣ ಹಾಗೂ ರೇಷ್ಮೆ ಸೀರೆ ಕಳವು ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಭಾರತಿ ನಾಯಕ್ ಎಂಬುವರು 4 ತಿಂಗಳಿನಿಂದ ಬಡಾವಣೆಯ ಬಿ.ಇಡಿ. ಕಾಲೇಜಿನ ಹಿಂಭಾಗದ ವಿಳಾಸದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತಿ ಭೀಮಾನಾಯ್ಕ ಅವರೊಂದಿಗೆ ವಾಸವಾಗಿದ್ದರು. ಭೀಮಾನಾಯ್ಕ ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಫೆ.3 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. 

ಅಂತ್ಯಕ್ರಿಯೆಯನ್ನು ಸ್ವಂತ ಊರಾದ ಕಡೂರು ತಾಲೂಕು ಸಿಂಗಟಗೆರೆಯಲ್ಲಿ ನೆರವೇರಿಸಿ ಫೆ.16ರಂದು ಹೆಂಜಗೌಡನಹಳ್ಳಿ ಮನೆಗೆ ಬಂದಾಗ ನೋಡಿದಾಗ ಕಳ್ಳರು, ಬಾಗಿಲು ಬೀಗ ಒಡೆದು ಬೀರುವಿನ ಲಾಕರ್ ಕೀ ಮುರಿದು 99,500 ರೂ. ಬೆಲೆಬಾಳುವ 12 ಗ್ರಾಂ ತೂಕದ 4 ಜೊತೆ ಚಿನ್ನದ ಓಲೆಗಳು, 6 ಗ್ರಾಂ ತೂಕದ ಬಂಗಾರದ ಉಂಗುರ,

ಎರಡು ರೇಷ್ಮೆ ಸೀರೆಗಳು ಮತ್ತು ದೇವರ ಮನೆಯಲ್ಲಿದ್ದ ಸುಮಾರು 150 ಗ್ರಾಂ ತೂಕದ ಬೆಳ್ಳಿಯ ದೀಪದ ಕಂಬ ಕದ್ದು ಪರಾರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ