ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ: ಶ್ರೀನಿವಾಸ್ ಪ್ರಸಾದ್ ಬಾಂಬ್

ಗುರುವಾರ, 6 ಏಪ್ರಿಲ್ 2017 (20:28 IST)
ಗೃಹ ಸಚಿವ ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ. ನನ್ನ ಮನೆಗೆ ದುಡ್ಡಿನ ಚೀಲ ತೆಗೆದುಕೊಂಡು ಬಂದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.
 
ಗೃಹ ಸಚಿವ ಜಿ.ಪರಮೇಶ್ವರ್ ಬೇಕಾದ್ರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎದುರಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
 
ಸಂಸದ ಧೃವನಾರಾಯಣ ಮಹಾಭಾರತದ ಶಕುನಿ ಇದ್ದಂತೆ. ಕಾಂಗ್ರೆಸ್ ಹಾಳು ಮಾಡಲು ಇಂತಹ ಶಕುನಿ ಕಾರಣ. ಇಲ್ಲಿನ ವಿಚಾರ ಅಲ್ಲಿ ಹೇಳ್ತಾನೆ, ಅಲ್ಲಿನ ವಿಚಾರ ಇಲ್ಲಿ ಹೇಳ್ತಾನೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ