ಲಾಕ್ ಡೌನ್ ನಡುವೆ ಪ್ರತಿಭಟನೆಗೆ ಇಳಿದ ನೌಕರರು

ಮಂಗಳವಾರ, 9 ಜೂನ್ 2020 (19:47 IST)
ಲಾಕ್ ಡೌನ್ 5.0 ನಡುವೆ ಗಾರ್ಮೆಂಟ್ ಕಂಪನಿ ನೌಕರರು ಪ್ರತಿಭಟನೆ ಹಾದಿ ತುಳಿದಿದ್ದಾರೆ.

ಶ್ರೀರಂಗಪಟ್ಟಣದ ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್ ಗೆ  ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ನೌಕರರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಹೊರ ಹಾಕುವ ಆತಂಕದಲ್ಲಿರುವ  ನೌಕರರಿಗೆ ಅನ್ಯಾಯವಾಗದಂತೆ ಗಾರ್ಮೆಂಟ್ಸ್ ನಡೆಸಿ ಅವರಿಗೆ ವೇತನ ನೀಡಿ ಎಂದು ಸೂಚನೆ ನೀಡಿದರು.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೂ ಸಮಾಲೋಚನೆ ನಡೆಸಿದರು. ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇತರರು ಜೊತೆಯಲಿದ್ದರು. ದೇಶದಲ್ಲಿ ಲಾಕ್ ಡೌನ್ ಹಿನ್ನಲೆಯಿಂದ ತಯಾರಾದ ವಸ್ತುಗಳು ರಫ್ತಾಗದ ಹಿನ್ನಲೆ ನೌಕರರಿಗೆ ವೇತನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಮುಖ್ಯಸ್ಥರು ಹೇಳಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ