ಮಹಿಳಾ ಖೈದಿಗಳಿಂದ ಪರಮೇಶ್ವರ್ ಗೆ ಘೇರಾವ್

ಭಾನುವಾರ, 9 ಸೆಪ್ಟಂಬರ್ 2018 (19:52 IST)
ಮಹಿಳಾ ಖೈದಿಗಳನ್ನು ಬಿಡುಗಡೆ ಮಾಡದಿರುವ ಕ್ರಮ ಖಂಡಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮಹಿಳಾ ಖೈದಿಗಳು ಘೇರಾವ್ ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಸನ್ನಡತೆಯ ಆಧಾರದ ಮೇಲೆ ಖೈದಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆಗಮಿಸಿದ್ದರು. ಆಗ ಡಿಸಿಎಂಗೆ ಸುತ್ತುವರೆದ ಮಹಿಳಾ ಖೈದಿಗಳು ನಮ್ಮನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿ ಘೇರಾವ್ ಹಾಕಿದ್ದಾರೆ.

ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ